ರಾಜ್ಯ ಸರ್ಕಾರಿ ನೌಕರರೇ ಗಮನಿಸಿ! ‘ಆರೋಗ್ಯ ಸಂಜೀವಿನಿ’ ಯೋಜನೆಯಡಿ ಉಚಿತ ಚಿಕಿತ್ಸೆ – ಯಾರು ಅರ್ಹರು ಗೊತ್ತಾ?

Published On: October 28, 2025
Follow Us
KASS Scheme Eligibility and Benefits Karnataka

ಕರ್ನಾಟಕ ರಾಜ್ಯ ಸರ್ಕಾರವು ಅಕ್ಟೋಬರ್ 1 ರಿಂದ ಜಾರಿಗೆ ತಂದಿರುವ (Karnataka Arogya Sanjeevini Scheme) [KASS] ಯೋಜನೆ ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಸದಸ್ಯರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸುತ್ತದೆ. ಈ ಯೋಜನೆಯಡಿ ನೌಕರರು ಹಾಗೂ ಅವರ ಅವಲಂಬಿತ ಸದಸ್ಯರು ಸರ್ಕಾರದ ಮಾನ್ಯತೆ ಪಡೆದ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ಪಡೆಯಲು ಅರ್ಹರಾಗಿರುತ್ತಾರೆ.

ಅರ್ಹರು

ಈ (KASS Scheme) ಸೌಲಭ್ಯಗಳಿಗೆ ಕರ್ನಾಟಕ ರಾಜ್ಯದ ಎಲ್ಲಾ ಸರ್ಕಾರಿ ನೌಕರರು ಹಾಗೂ ಅವರ ಅವಲಂಬಿತ ಸದಸ್ಯರು ಅರ್ಹರಾಗಿರುತ್ತಾರೆ. ಆದರೆ ಕೆಲವು ಇಲಾಖೆ ಮತ್ತು ಗುಂಪುಗಳನ್ನು ವೈದ್ಯಕೀಯ ಹಾಜರಾತಿ ನಿಯಮಗಳು 1963ರ ಪ್ರಕಾರ ಹೊರತಾಗಿಸಲಾಗಿದೆ.

ಅವಲಂಬಿತರ ವ್ಯಾಖ್ಯಾನ

ಅವಲಂಬಿತರಲ್ಲಿ (Government Employee), ಅವರ ಪತಿ ಅಥವಾ ಪತ್ನಿ, ತಂದೆ-ತಾಯಿ (ಮಲತಾಯಿಯನ್ನೊಳಗೊಂಡಂತೆ), ಹಾಗೂ ಸಂಪೂರ್ಣವಾಗಿ ಅವಲಂಬಿತವಾಗಿರುವ ಮಕ್ಕಳು ಸೇರಿರುತ್ತಾರೆ. ತಂದೆ-ತಾಯಿಯ ಒಟ್ಟು ಮಾಸಿಕ ಆದಾಯ (₹8,500/-) ಹಾಗೂ ಚಾಲ್ತಿಯ ತುಟ್ಟಿಭತ್ಯೆಯನ್ನು ಮೀರಬಾರದು.

ಯೋಜನೆಗೆ ಒಳಪಡುವುದಿಲ್ಲದ ವರ್ಗ

ಸ್ಥಳೀಯ ಸಂಸ್ಥೆಗಳು, ಅನುದಾನಿತ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಗುತ್ತಿಗೆ ಅಥವಾ ಅರೆಕಾಲಿಕ ನೌಕರರು, ದಿನಗೂಲಿ ನೌಕರರು (Public Sector Employees) ಈ ಯೋಜನೆಗೆ ಒಳಪಡುವುದಿಲ್ಲ. ಜೊತೆಗೆ, ‘ಆರೋಗ್ಯ ಭಾಗ್ಯ’ ಯೋಜನೆಯಡಿ ಈಗಾಗಲೇ ಒಳಪಟ್ಟ ಪೊಲೀಸ್ ಇಲಾಖೆಯ ನೌಕರರು ಕೂಡಾ ಇದರ ಭಾಗವಾಗುವುದಿಲ್ಲ.

ಕುಟುಂಬ ವ್ಯಾಖ್ಯಾನ

ವೈದ್ಯಕೀಯ ಹಾಜರಾತಿ ನಿಯಮಗಳ ಪ್ರಕಾರ, ಕುಟುಂಬ ಎಂದರೆ ಪತಿ ಅಥವಾ ಪತ್ನಿ, ತಂದೆ-ತಾಯಿ ಹಾಗೂ ಸಂಪೂರ್ಣವಾಗಿ ಅವಲಂಬಿತವಾಗಿರುವ ಮಕ್ಕಳು ಎಂದು ಹೇಳಲಾಗಿದೆ. (Family Definition in KASS)

ಇತರ ಪ್ರಮುಖ ಅಂಶಗಳು

  • ವೃತ್ತಿಪರ ಅವಧಿಯಲ್ಲಿರುವ ನೌಕರರೂ (Probationary Employee) ಯೋಜನೆಗೆ ಅರ್ಹರು.

  • ದಂಪತಿಗಳಿಬ್ಬರೂ ಸರ್ಕಾರಿ ನೌಕರರಾಗಿದ್ದರೆ, ಹೆಚ್ಚು ವೇತನ ಪಡೆಯುವವರು ಮುಖ್ಯ ಕಾರ್ಡ್ ಹೋಲ್ಡರ್ ಆಗಿರುತ್ತಾರೆ.

  • ಮಲಮಕ್ಕಳು ಮತ್ತು ದತ್ತು ಮಕ್ಕಳು ಸಹ (Dependent Children) ಯೋಜನೆಗೆ ಅರ್ಹರು.

  • ಅತ್ತೆ-ಮಾವರನ್ನು ಸೇರಿಸಲು ಮಹಿಳಾ ನೌಕರರಿಗೆ ಆಯ್ಕೆ ಸೌಲಭ್ಯ ನೀಡಲಾಗಿದೆ, ಆದರೆ ಅವರ ಆದಾಯ ₹8,500 ಮೀರಬಾರದು.

  • ಅವಲಂಬಿತ ಪುತ್ರರು ಅಥವಾ ಪುತ್ರಿಯರು ಉದ್ಯೋಗ ದೊರೆಯುವವರೆಗೆ ಅಥವಾ 30 ವರ್ಷ ವಯಸ್ಸಿನವರೆಗೆ ಯೋಜನೆಗೆ ಒಳಪಡುತ್ತಾರೆ. ಶಾಶ್ವತ ಅಂಗವೈಕಲ್ಯ ಇರುವವರು ವಯಸ್ಸಿನ ಮಿತಿ ಇಲ್ಲದೆ ಸೌಲಭ್ಯ ಪಡೆಯುತ್ತಾರೆ.

  • ನೊಂದಾಯಿತ ಆಸ್ಪತ್ರೆಗಳಲ್ಲಿ (Empaneled Hospitals) ಗುಂಪು ಎ ಮತ್ತು ಬಿ – ಖಾಸಗಿ ವಾರ್ಡ್, ಗುಂಪು ಸಿ – ಅರೆ ಖಾಸಗಿ ವಾರ್ಡ್, ಗುಂಪು ಡಿ – ಜನರಲ್ ವಾರ್ಡ್ ಅರ್ಹರಾಗಿರುತ್ತಾರೆ.

ಈ (Karnataka Arogya Sanjeevini Yojane) ಯೋಜನೆ ರಾಜ್ಯ ಸರ್ಕಾರಿ ನೌಕರರಿಗೆ ಆರೋಗ್ಯ ಭದ್ರತೆ ನೀಡುವ ಪ್ರಮುಖ ಹೆಜ್ಜೆಯಾಗಿದ್ದು, ಕುಟುಂಬದ ಎಲ್ಲ ಸದಸ್ಯರಿಗೂ ಭದ್ರ ವೈದ್ಯಕೀಯ ಸೇವೆ ಒದಗಿಸುವ ಉದ್ದೇಶ ಹೊಂದಿದೆ.

Sanjay

I’m Sanjay, a passionate digital content creator with over 10 years of experience in Kannada news and media. As the founder of hosanews.com, I focus on delivering accurate, engaging, and insightful Kannada news for readers across Karnataka. 📞 Contact: +91 72049 88850 📧 Email: hogirihalagi@gmail.com

Join WhatsApp

Join Now

Join Telegram

Join Now

Leave a Comment