ಭಾರತದಲ್ಲಿ ಬ್ಯಾಂಕ್ ವಿಲೀನದ (Bank Merger) ಸುದ್ದಿ ಬಂದರೆ ಅದೇ ದೊಡ್ಡ ಸಂಚಲನಕ್ಕೆ ಕಾರಣವಾಗುತ್ತದೆ. ಏಕೆಂದರೆ, ಒಂದು ಬ್ಯಾಂಕ್ ಮತ್ತೊಂದು ಬ್ಯಾಂಕ್ನೊಂದಿಗೆ ವಿಲೀನಗೊಳ್ಳುವುದೆಂದರೆ ಅದರ ಪರಿಣಾಮ ಜನರ ಖಾತೆಗಳಿಂದ ಹಿಡಿದು ಹೂಡಿಕೆದಾರರ (Investors) ಹಿತಾಸಕ್ತಿಯವರೆಗೆ ಬೀಳುತ್ತದೆ. ಇತ್ತೀಚೆಗೆ ಇದೇ ರೀತಿಯ ಬ್ಯಾಂಕ್ ವಿಲೀನದ ಸುದ್ದಿ ಮತ್ತೆ ದೇಶದ ಆರ್ಥಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಭಾರತದ ಬ್ಯಾಂಕ್ಗಳು (Indian Banks) ಶಿಸ್ತಿನ ಆರ್ಥಿಕ ವ್ಯವಸ್ಥೆಗಾಗಿ ಜಗತ್ತಿನಾದ್ಯಂತ ಮೆಚ್ಚುಗೆ ಪಡೆದಿವೆ. ಅದರಲ್ಲೂ ಕರ್ನಾಟಕದ (Karnataka Banks) ಕರಾವಳಿ ಭಾಗದಲ್ಲಿ ಹುಟ್ಟಿದ ಬ್ಯಾಂಕ್ಗಳು, ಉದಾಹರಣೆಗೆ ವಿಜಯಾ ಬ್ಯಾಂಕ್ ಮತ್ತು ಕರ್ನಾಟಕ ಬ್ಯಾಂಕ್ಗಳು, ಇಂದಿಗೂ ಭಾರತೀಯ ಆರ್ಥಿಕತೆಯ (Indian Economy) ಕಂಬದಂತಿವೆ. ಇವುಗಳ ಜೊತೆ, ಮೈಸೂರು ಮಹಾರಾಜರ ಕಾಲದಲ್ಲಿ ಸ್ಥಾಪಿತವಾದ ಮೈಸೂರು ಬ್ಯಾಂಕ್ ಕೂಡ ಕರ್ನಾಟಕದ ಆರ್ಥಿಕ ಬೆಳವಣಿಗೆಗೆ ಮಹತ್ವದ ಪಾತ್ರ ವಹಿಸಿತ್ತು. ಬಳಿಕ ಈ ಮೈಸೂರು ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ಜೊತೆ ವಿಲೀನಗೊಂಡಿತ್ತು. ಈಗ ಮತ್ತೊಮ್ಮೆ ಇದೇ ರೀತಿಯ ದೊಡ್ಡ ಬ್ಯಾಂಕ್ಗಳ ವಿಲೀನ ಪ್ರಕ್ರಿಯೆಗೆ ಸರ್ಕಾರದಿಂದ ಮುನ್ಸೂಚನೆ ಬಂದಿದೆ.
ಸರ್ಕಾರದ ಹೊಸ ಆರ್ಥಿಕ ನೀತಿಯ ಪ್ರಕಾರ, ಕೆಲವು ಸರ್ಕಾರಿ ಬ್ಯಾಂಕ್ಗಳನ್ನು (Public Sector Banks) ವಿಲೀನಗೊಳಿಸುವ ಪ್ರಸ್ತಾಪ ಚರ್ಚೆಯಲ್ಲಿದೆ. ಈ ಪೈಕಿ ಇಂಡಿಯನ್ ಓವರ್ಸೀಸ್ ಬ್ಯಾಂಕ್ (Indian Overseas Bank), ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (Central Bank of India), ಬ್ಯಾಂಕ್ ಆಫ್ ಇಂಡಿಯಾ (Bank of India) ಮತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರ (Bank of Maharashtra) ಗಳನ್ನು ದೊಡ್ಡ ಬ್ಯಾಂಕ್ಗಳಾದ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB), ಬ್ಯಾಂಕ್ ಆಫ್ ಬರೋಡಾ (Bank of Baroda) ಅಥವಾ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಜೊತೆಗೆ ವಿಲೀನಗೊಳಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಅಧಿಕೃತ ಘೋಷಣೆ ಇನ್ನೂ ಬಾರದಿದ್ದರೂ, ಈ ವಿಚಾರ ಈಗಾಗಲೇ ಆರ್ಥಿಕ ತಜ್ಞರ (Financial Experts) ಹಾಗೂ ಹೂಡಿಕೆದಾರರ ಗಮನ ಸೆಳೆದಿದೆ.
ಹೂಡಿಕೆದಾರರ ದೃಷ್ಟಿಯಿಂದ, ಬ್ಯಾಂಕ್ ವಿಲೀನ ಪ್ರಕ್ರಿಯೆ (Bank Merger Process) ಹೂಡಿಕೆ ಮೌಲ್ಯ, ಶೇರು ಬೆಲೆಗಳು (Stock Prices) ಹಾಗೂ ಬ್ಯಾಂಕಿಂಗ್ ಸೇವೆಗಳ (Banking Services) ಮೇಲೆಯೂ ಪರಿಣಾಮ ಬೀರುವ ಸಾಧ್ಯತೆ ಇದೆ. ಭಾರತದ ಆರ್ಥಿಕ ಅಭಿವೃದ್ಧಿಯಲ್ಲಿ ಬ್ಯಾಂಕ್ಗಳ ಪಾತ್ರ ಅನಿವಾರ್ಯವಾಗಿದ್ದು, ಈ ವಿಲೀನ ಪ್ರಕ್ರಿಯೆಯಿಂದ ಬ್ಯಾಂಕಿಂಗ್ ವ್ಯವಸ್ಥೆ ಮತ್ತಷ್ಟು ಬಲಿಷ್ಠಗೊಳ್ಳಬಹುದು ಎಂದು ವಿಶ್ಲೇಷಕರು ನಂಬಿದ್ದಾರೆ. ಆದಾಗ್ಯೂ, ಅಧಿಕೃತ ದೃಢೀಕರಣ ಬರುವವರೆಗೂ ಹೂಡಿಕೆದಾರರು ಎಚ್ಚರಿಕೆಯಿಂದ ಇರಬೇಕು.










